Chief Editor
Manohar. R (Manu)
Photo Journalist
chitrataramanu@gmail.com
+91 9845549026
ಚಂಡೀಗಡ-ಅಮೃತ್‌ಸರ ದಲ್ಲಿ ಬರ್ಫಿ
Posted date: 23 Tue, Oct 2012 ? 10:55:42 AM
ಬರ್ಫಿ ಸವಿಯಲು ಅದೆಷ್ಟು ಆನಂದವಾಗುತ್ತದೆಯೋ ಅದೇ ರೀತಿ ಪ್ರೀತಿಯ ಅನುಭವವೂ ಇರುತ್ತದೆ ಎಂದು ಹೇಳ ಹೊರಟಿರುವ ನಿರ್ದೇಶಕ ಶೇಖರ್ ದೂರದ ಚಂಡೀಗಡ ಹಾಗೂ ಅಮೃತ್‌ಸರದ ರುದ್ರ ರಮಣಿಯ ಪರಿಸರದ ಸುತ್ತಮುತ್ತ ಬರ್ಫಿ ಚಿತ್ರಕ್ಕೆ ದಿಗಂತ್, ಬಾಮಾ ಅಭಿನಯದ ಎರಡು ಹಾಡುಗಳ ಚಿತ್ರೀಕರಣಕ್ಕಾಗಿ ಚಿತ್ರತಂಡ ತೆರಳಿದೆ.
 
ಕೆ.ಎಂ. ಶಂಕರ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಶೇಖರ್ ಕಥೆ, ಚಿತ್ರಕಥೆ ರಚಿಸಿ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಗುಂಡ್ಲು ಪೇಟೆ ಸುರೇಶ್ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ, ಬಿ.ಎ. ಮಧು ಸಂಭಾಷಣೆ, ಜಯಂತ್ ಕಾಯ್ಕಿಣಿ, ಕವಿರಾಜ್ ಗೌಸ್‌ಫಿರ್, ಹೃದಯಶಿವ ಸಾಹಿತ್ಯ, ಕೆ.ಎಂ. ಪ್ರಕಾಶ್ ಸಂಕಲನ, ಎಸ್. ಬಾಹುಬಲಿ ಸಹಕಾರ ನಿರ್ದೇಶನ, ಹರ್ಷ ನೃತ್ಯ ನಿರ್ದೇಶನ, ಎಂ.ಎಸ್. ಚಂದ್ರಶೇಖರ್ ನಿರ್ಮಾಣ ನಿರ್ವಹಣೆ ಇದೆ.  ತಾರಾಗಣದಲ್ಲಿ ದಿಗಂತ್, ಭಾಮಾ ಸುಧಾ ಬೆಳವಾಡಿ, ಜೈಜಗೀಶ್, ಹರೀಶ್‌ರಾಜ್, ದಿಲೀಪ್ ರಾಜ್, ಸುಜೇಂದ್ರ ಪ್ರಸಾದ್, ಕುರಿಪ್ರತಾಪ್ ಇನ್ನು ಮೊದಲಾದವರ ತಾರಾಗಣವಿದೆ.

 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಚಂಡೀಗಡ-ಅಮೃತ್‌ಸರ ದಲ್ಲಿ ಬರ್ಫಿ - Chitratara.com
Copyright 2009 chitratara.com Reproduction is forbidden unless authorized. All rights reserved.